Wednesday, September 17, 2008

ಹಿಂದೂ ವಿಗೆ ಸುಣ್ಣ;ಕ್ರಿಸ್ತಿಯನ್ ಗೆ ಬೆಣ್ಣೆ....


ಮ್ಮ ರಾಜಕೀಯ ಮುಖಂಡರು ನಿದ್ರೆಯಿಂದ ಕೊನೆಗೂ ಎಚ್ಚೆತ್ತು ಕೊಳ್ಳುವ ಕಾಲ ಸನಿಹ ಬಂದಿದೆ.

ಹಿಂದೂ ಭೂಮಿಯಲ್ಲಿ ಬದುಕಿ, ಜೀವನ ಕಳೆದು,೮ ತಲೆ ಮಾರಿತಾಗುವಷ್ಟು ಸಂಪತ್ತನ್ನು ಸಂಪಾದಿಸುವ ಹಿಂದೂ ರಾಜಕಾರಣಿಗಳು ಹಿಂದೂ ವಿಗೆ ಏನಾದರು ತಲೆ ಕೆಡಿಸಿಕೊಳ್ಳುವುದಿಲ್ಲ.ಅದೇ "ಅಲ್ಪ ಸಂಖ್ಯಾತರು" ಎಂದು ಹೆಸರಾದವರಿಗೆ ೧ ಓಟಿಗಾಗಿ ಇನ್ನಿಲ್ಲದ ಸಹಾಯವೇ ಹರಿದು ಬರುತ್ತದೆ!! ಮೊನ್ನೆ ಮೊನ್ನೆಯಾದ ಮಂಗಳೂರಿನ ಘಟನೆಯನ್ನೇ ನೋಡಿ. ಅಲ್ಲಿ ಹಿಂದೂ ಕ್ರಿಸ್ತಿಯನ್ ಗಲಾಟೆಯಲ್ಲಿ ೨ ಕೊಮಿನವರಿಗೂ ಜೀವ ಹಾನಿ,ನಷ್ಟ ಉಂಟಾಯಿತು.ಆದರೆ ನಮ್ಮ ಕರ್ಣಾಟಕದ ಮೊದಲ ಪ್ರಧಾನಿ ದೇವೇಗೌಡರು ಮಾತ್ರ "ಅಲ್ಪ ಸಂಖ್ಯಾತರಿಗೆ " ಸಾಂತ್ವಾನ ಹೇಳಿ ಬಂದರು. ಬೆಂಗಳೂರಿನಲ್ಲಿ ಕುಳಿತು ಕೊಂಡು ಮಹಾನ್ ಕಾಂಗ್ರೆಸ್ಸ್ ಮುಖಂಡರು " ಅಲ್ಪಸಂಖ್ಯಾತರಿಗೆ " ಏನಾದರು ನಾವು ಸುಮ್ಮನಿರುವುದಿಲ್ಲ ಎಂದು ಅಬ್ಬರಿಸಿದರು.ಆದರೆ ಒಬ್ಬರು ಹಿಂದುವಿಗೆ ಏನಾಯಿತು ಎಂದು ಕೇಳಲು ಇಲ್ಲ.!!(ಬಿ.ಜೆ.ಪಿ ಒಂದು ಬಿಟ್ಟು ) ಪ್ರತಿ ವರ್ಷ ಇಂಥ ಘಟನೆ ನೂರಾರು ನಡೆಯುತ್ತದೆ.ಆದರೆ ಎಲ್ಲದಕ್ಕೂ ಹಿಂದೂ ಪರ ಸಂಘಟನೆಗಳನ್ನೇ ಹೊಣೆ ಮಾಡಲಾಗುತ್ತದೆ.ಅಂಥ ಘಟನೆಗಳಿಗೆ ಕಾರಣಿಕರ್ಥರು ಯಾರು ಎಂದು "ಭೂತ ಕನ್ನಡಿ " ಹಿಡಿದು ನೋಡಲು ಯಾರಿಗೂ ಸಮಯವಿಲ್ಲ. ಹಿಂದೂ ಭೂಮಿಯಲ್ಲಿ ಬದುಕಿ, ಅವರದೇ ಅನ್ನ ತಿನ್ನುತ್ತಾ , ಅವರ ಜನರನ್ನೇ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತರೆಂದರೆ?? ಹಿಂದೂಗಳು ನೋಡಿ ಸುಮ್ಮನಿರಬೇಕ? ಹಿಂದೂಗಳ ಬಗ್ಗೆ ಕೆಟ್ಟದಾಗಿ ಬರೆದು ಅವರ ನಾಡಲ್ಲೇ ಅದನ್ನು ವಿತರಣೆಮಾಡುವ ಧೈರ್ಯ ಅವರಿಗಿದ್ದರೆ ಅದನ್ನು ವಿರೋಧಿಸುವ ಧೈರ್ಯ ಹಿಂದುಗಳಿಗೆ ಅದಿಷ್ಟಿರಬೇಡ. ಹಿಂದೂಗಳ ಮೇಲೆ ಆರಂಭದಿಂದಲೂ ಅತಿಕ್ರಮಣ ನಡೆಯಿತ್ತಿತ್ತು ಎಂದು ಇತಿಹಾಸದ ಪುಸ್ತಕವೇ ಸಾರುತ್ತದೆ. ಅಂದು ಇತರ ಜನಾಂಗದವರು ಅದನ್ನು ಮಾಡುತ್ತಿದ್ದರೆ ಇಂದು ಹಿಂದೂ ಎನ್ನಿಸಿಕೊಂದವರೇ ಅದನ್ನು ಮಾಡುತ್ತಿರುವದು ದುರ್ಧೈವ. ಕಾಂಗ್ರೆಸ ನಾಯಕರು ಮತ್ತು ಜೆ.ಡಿ.ಎಸ್. ನ ಮುಖಂಡರು ಅಲ್ಪ ಸಂಖ್ಯಾತರು ಎನ್ನಿಸಿಕೊಂಡಿರುವ ಬಹು ಸಂಖ್ಯಾತರಿಗೆ ಬೆಂಬಲ ಕೊಡಲಿ.ಆದರೆ ಎಲ್ಲದಕ್ಕೂ ಹಿಂದೂ ಸಂಘಟನೆಗಳನ್ನು ದುರುವುದನ್ನು ನಿಲ್ಲಿಸಲಿ.

ಮರೆತ ಮಾತು:

ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ನವರು ಹಿಂದೂ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ.ಆದರೆ ದೇಶದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವಂತೆ ಯಾವಾಗಲಾದರು ಹೇಳಿದ್ದಾರ??

No comments: